Select Location
All Locations
State
Region
City / District
TMC Crisis: ಮಮತಾ ವಿರುದ್ಧ ದಂಗೆ ಎದ್ದ ಟಿಎಂಸಿ ಶಾಸಕರು! ಸದ್ಯದಲ್ಲೇ ‘ಅಸಲಿ ತೃಣಮೂಲ’ ಪಕ್ಷ ಘೋಷಣೆ?

TMC Crisis: ಮಮತಾ ವಿರುದ್ಧ ದಂಗೆ ಎದ್ದ ಟಿಎಂಸಿ ಶಾಸಕರು! ಸದ್ಯದಲ್ಲೇ ‘ಅಸಲಿ ತೃಣಮೂಲ’ ಪಕ್ಷ ಘೋಷಣೆ?

ಕೋಲ್ಕತ್ತಾ: 2026 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಹೀನಾಯವಾಗಿ ಸೋತ ನಂತರ, ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಈಗ ಜಗಜ್ಜಾಹೀರಾಗಿದೆ. ಇದೀಗ ತೃಣಮೂಲ ಕಾಂಗ್ರೆಸ್ ಮತ್ತೊಂದು ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರಿಂದ ಹೊರಹಾಕಲ್ಪಟ್ಟ ಶಾಸಕರು ಪಕ್ಷವನ್ನೇ ವಿಭಜನೆ ಮಾಡುವ ಸಲುವಾಗಿ ರಹಸ್ಯ ಸಭೆಗಳಲ್ಲಿ ಭಾಗಿಯಾಗಿದ್ದಾರೆ.

ಇಬ್ಬರು ಪ್ರಬಲ ಟಿಎಂಸಿ ಶಾಸಕರಾದ ಋತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರನ್ನು ಪಕ್ಷದಿಂದ ಮಮತಾ ಬ್ಯಾನರ್ಜಿ ಆತುರದಿಂದ ಹೊರಹಾಕಿದ್ದರು. ಆದರೆ ಕಥೆ ಅಲ್ಲಿಗೆ ಮುಗಿದಿಲ್ಲ. ನಿಜವಾದ ಆಟ ಅವರ ಉಚ್ಚಾಟನೆಯ ನಂತರ ಪ್ರಾರಂಭವಾಗಿದ್ದು, ಮಹಾರಾಷ್ಟ್ರದಲ್ಲಿ ಶಿವಸೇನೆ ಇಬ್ಭಾಗವಾದಂತೆ ಟಿಎಂಸಿ ಕೂಡ ಇಬ್ಭಾಗವಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಇದನ್ನೂ ಓದಿ: School Holiday: ಜೂನ್ 1ರಿಂದ 30ರವರೆಗೆ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ! ಈ ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್! ಅಸಲಿಗೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹುದ್ದೆಗೆ ಶೋಭಂದೇಬ್ ಚಟರ್ಜಿ ಅವರ ಹೆಸರನ್ನು ಪ್ರಸ್ತಾಪಿಸುವ ಅಧಿಕೃತ ಪತ್ರಕ್ಕೆ ಸಹಿ ಹಾಕಲು ಇಬ್ಬರು ಶಾಸಕರು ನಿರಾಕರಿಸಿದ್ದರು. ಅತ್ತ ಪಕ್ಷದ ಸಭೆಗಳಿಗೆ ನಿರಂತರವಾಗಿ ಗೈರು ಹಾಜರಾಗುತ್ತಿದ್ದಾರೆ ಎಂದು ಪಕ್ಷವು ಆರೋಪಿಸಿದೆ. ಆದರೆ, ಈ ಕ್ರಮದ ನಂತರ, ಇಬ್ಬರು ಶಾಸಕರು ಮಮತಾ ಬ್ಯಾನರ್ಜಿ ಅವರ ನಾಯಕತ್ವದ ಮೇಲೆ ನೇರ ದಾಳಿ ನಡೆಸಿದರು, ಇದು ಟಿಎಂಸಿಯೊಳಗಿನ ಗಮನಾರ್ಹ ಬಿರುಕನ್ನು ಬಹಿರಂಗಪಡಿಸಿತು.

Source : News18 Kannada

1 hour ago

Home Flash News